ಇನ್ನು ಭಾರತದಿಂದ ತೆರಳುವ ಮುನ್ನ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ, ಸಿರಿಫೋರ್ಟ್ನಲ್ಲಿ ಕೊನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು. ಈ ಕಾರ್ಯಕ್ರಮದಲ್ಲಿ, ನೊಬೆಲ್ ಶಾಂತಿ ಪುರಸ್ಕೃತರಾದ ಕೈಲಾಶ್ ಸತ್ಯಾರ್ಥಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗಿಯಾಗಿದ್ದರು. ದೆಹಲಿ ಯುನಿವರ್ಸಿಟಿಯ ಆಯ್ದ ವಿದ್ಯಾರ್ಥಿಗಳು, ಸಾಮಾಜಿಕ ಕಾರ್ಯಕರ್ತರನ್ನೂ ಆಹ್ವಾನಿಸಲಾಗಿತ್ತು. ಸಿರಿಫೋರ್ಟ್ನಲ್ಲಿ 2 ಸಾವಿರ ಅತಿಥಿಗಳನ್ನುದ್ದೇಶಿಸಿ ಮಾತನಾಡಿದ ಒಬಾಮ, ತಮ್ಮ ಮಾತಿನಲ್ಲೇ ಮೋಡಿ ಮಾಡಿದ್ರು. ಭಾರತದ ಯುವಜನಾಂಗ ಜಗತ್ತನ್ನೇ ಬದಲಿಸಬಲ್ಲದು ಅಂತಾ ಹೇಳಿದ್ರು. ಭಾರತ ಯುವಜನರ ರಾಷ್ಟ್ರ. ಯುವಜನರನ್ನು ಸಶಕ್ತಗೊಳಿಸಿದ್ರೆ ದೇಶ ಸದೃಢವಾಗಬಹುದು ಎನ್ನುವುದಕ್ಕೆ ಭಾರತವೇ ಸಾಕ್ಷಿ ಅಂತಾ ಹೇಳಿದ್ರು. ಅಮೆರಿಕ ಮತ್ತು ಭಾರತ 21ನೇ ಶತಮಾನದಲ್ಲಿ ಮೈತ್ರಿಯ ಹೊಸ ಅಧ್ಯಾಯವನ್ನು ತೆರದಿದೆ. ಇದರಿಂದ ಇಡೀ ಜಗತ್ತಿಗೇ ಒಳಿತಾಗಲಿದೆ. ಪರಮಾಣು ಒಪ್ಪಂದದಿಂದ ಭಾರತ ಇಂಧನ ಸಾಮರ್ಥ್ಯದಲ್ಲಿ ಬಲಗೊಳ್ಳಲಿದೆ ಅಂತಾ ಹೇಳಿದ್ರು.
Posted on: Tue, 27 Jan 2015 14:47:57 +0000