ತುಮಕೂರು ಜಿಲ್ಲಾ - TopicsExpress



          

ತುಮಕೂರು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಗಣಿತ ವಿಷಯ ಪರಿವೀಕ್ಷಕ ರಾಜಣ್ಣ ಅವರನ್ನು ತಾಲೂಕು ಪ್ರೌಢಶಾಲಾ ಗಣಿತ ಶಿಕ್ಷಕರ ಸಂಘದ ವತಿಯಿಂದ ಭಾನುವಾರ ಸನ್ಮಾನಿಸಲಾಯಿತು. ಇದೇ ವೇಳೆ ಮಾರ್ಚ್ ೨೦೧೩ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ೧೦೦ -ಲಿತಾಂಶದ ಸಾಧನೆಗೈದ ತಾಲೂಕಿನ ೨೨ ಶಾಲೆಗಳ ಗಣಿತ ಶಿಕ್ಷಕರನ್ನು ಗೌರವಿಸಲಾಯಿತು. ಕ್ಷೇತ್ರ ಶಿಕ್ಷಣಾಽಕಾರಿ ವಿ.ಜಿ.ಲೋಕೇಶ್ ಮಾತನಾಡಿ, ತಮ್ಮ ನಿವೃತ್ತ ಸಹೋದ್ಯೋಗಿ ಮಿತ್ರರಾದ ರಾಜಣ್ಣ ಅವರ ಸೇವೆ ಸ್ಮರಿಸಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಡಿ.ಕೃಷ್ಣ , ಸನ್ಮಾನಿತರು ಹೊಂದಿದ್ದ ಶಿಕ್ಷಕರ ಜೊತೆಗಿನ ಸೌಹಾರ್ದ ಒಡನಾಟ ಕೊಂಡಾಡಿದರು. ಮಹಾತ್ಮಗಾಂಧಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲೆ ಮಮತಾಮಣಿ, ರಾಜಣ್ಣ ನವರು ಪ್ರಾಮಾಣಿಕತೆ ಶಿಕ್ಷಕರಾದ ನಮಗೆ ಅನುಕರಣೀಯ ಮೌಲ್ಯಗಳಾಗಬೇಕೆಂದರು. ಹಿರಿಯಶಿಕ್ಷಕರಾದ ಸಿ.ವಿ.ಶಿವರುದ್ರಯ್ಯ ಹಾಗೂ ನಂದಕುಮಾರ್,ಆಂಟೋನಿಟ್ ಅರುಣ, ಎಚ್. ಎಲ್.ಶಿವಲಿಂಗಯ್ಯ ಪ್ರಸಕ್ತ ಸಿಬಿಎಸ್‌ಇ ಪಠ್ಯಕ್ರಮದ ಬದಲಾವಣೆ ವೇಳೆ ಅವರ ಮಾರ್ಗದರ್ಶನವು ಅತ್ಯಂತ ಮಹತ್ವದ್ದಾಗಿತ್ತೆಂದು ಭಾವುಕರಾದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜಣ್ಣ, ಸವಾಲುಗಳನ್ನು ಸ್ವೀಕರಿಸುವ ದಕ್ಷತೆ ಶಿಕ್ಷಕರಿಗಿದ್ದು ಆತ್ಮವಿಶ್ವಾಸದಿಂದ ಎದುರಿಸಬೇಕೆಂದರು. ವಿ.ಸುಭಾಷಿಣಿ ಪ್ರಾರ್ಥನಾ ಗೀತೆ ಹಾಡಿದರು. ಸಂಘದ ಕಾರ್ಯದರ್ಶಿ ಕೆ.ಜಿ.ಪ್ರಕಾಶಮೂರ್ತಿ ಸ್ವಾಗತಿಸಿದರು. ********** ಈ ದಿನದ ಪ್ರಾಯೋಜಕರು: Systems Technology : ಸಿಸ್ಟಮ್ ಟೇಕ್ನಾಲಜಿ : ಮಂಡ್ಯ-ಮೈಸೂರು-ಹಾಸನ-ತುಮಕೂರು : 7259108417: Today Offer : Intel Processor2.6 Ghz, Ram 1GB, 160GB Hard Disk, DVD R/W, Mouse, TFT Monitor 15 Inch.. Offer Price : ಕೇವಲ 9999/- Only. Home Delivery (High Configuration ಕಂಪ್ಯೂಟರ್ ಗಳನ್ನು Assemble ಮಾಡಿಕೊಡಲಾಗುವುದು. ಎಲ್ಲಾ ಕಂಪ್ಯೂಟರ್ ಬಿಡಿಭಾಗಗಳ ಮೇಲೆ ಕಂಪನಿ ಆಧಾರದ ಮೇಲೆ 2 ವರ್ಷ ಅಥವಾ 3 ವರ್ಷ ಗ್ಯಾರಂಟಿ ಕೊಡಲಾಗುವುದು)
Posted on: Mon, 16 Sep 2013 11:40:47 +0000

Trending Topics



Recently Viewed Topics




© 2015