ಆಂಜನೇಯ ಅಪ್ಪ ಅಮ್ಮ ಆಸ್ತಿಕರಾಗಿದ್ದರೆ ಅವರಿಗೆ ಕೋತಿ ಅಂತ ಹೆಸರಿಡುತ್ತಿದ್ದರು ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಸಚಿವ ಆಂಜನೇಯ ತಿರುಗೇಟುನೀಡಿದ್ದಾರೆ. ಪ್ರತಾಪ್ ಸಿಂಹ ಪೂರ್ವಜರು ಕೂಡಾ ಮೊದಲು ಕೋತಿಗಳಾಗಿದ್ದವರು ಎಂಬುದನ್ನು ಅವರು ತಿಳಿದುಕೊಳ್ಳಲಿ ಎಂದು ಆಂಜನೇಯ ಟಾಂಗ್ ಕೊಟ್ಟಿದ್ದಾರೆ. ನಿನ್ನೆ ವಾಜಪೇಯಿ ಮತ್ತು ಮಾಳವೀಯರಿಗೆ ಭಾರತರತ್ನ ನೀಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದ ಆಂಜನೇಯ ನಾಥೂರಾಮ್ ಗೋಡ್ಸೆಗೂ ಇವ್ರು ಭಾರತ ರತ್ನ ನೀಡ್ತಾರೆ ಎಂದು ಆರೋಪಿಸಿದ್ರು.
Posted on: Fri, 26 Dec 2014 05:06:53 +0000
Trending Topics
Recently Viewed Topics
© 2015