ಬೇಲೇಕೇರಿ ಅದಿರು ನಾಪತ್ತೆ - TopicsExpress



          

ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿರುವ, ವಿಜಯನಗರ ಶಾಸಕ ಆನಂದ್ ಸಿಂಗ್ ಇಂದು ಹಂಪಿಗೆ ಆಗಮಿಸಿದ್ರು. ಹಂಪಿಯ ವಿರೂಪಾಕ್ಷ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು. ಬೆಂಗಳೂರಿನಿಂದ ನೇರವಾಗಿ ಪುಣ್ಯ ಕ್ಷೇತ್ರ ಹಂಪಿಗೆ ಆಗಮಿಸಿದ, ಆನಂದ್ ತುಂಗಾಭದ್ರಾ ನದಿಯಲ್ಲಿ ಸ್ನಾನ ಮಾಡಿ, ತಾವು ಧರಿಸಿದ ಬಟ್ಟೆಗಳನ್ನ ನೀರಿಗೆ ಬಿಟ್ರು. ನಂತ್ರ, ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು. ಬಳಿಕ ಹಂಪಿಯಿಂದ ಹೊಸಪೇಟೆಯವರೆಗೆ ಪಾದಯಾತ್ರೆ ಮಾಡಿದ್ರು. ಅಪಾರ ಸಂಖ್ಯೆಯ ಬೆಂಬಲಿಗರು ಪಾದಯಾತ್ರೆಯಲ್ಲಿ ಭಾಗವಹಿಸಿದ್ರು. ದಾರಿಯುದ್ದಕ್ಕೂ ಜನರಿಗೆ ಕೈ ಮುಗಿಯುತ್ತಾ, ಪಾದಯಾತ್ರೆ ನಡೆಸಿದ್ರು. ಇನ್ನೂ ಶಾಸಕ ಆನಂದ್ ಸಿಂಗ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಕ್ಕೆ ತಂದೆ ಪೃಥ್ವಿರಾಜ್ ಸಿಂಗ್ ಕುಣಿದು ಕುಪ್ಪಳಿಸಿದ್ರು. ಈ ವೇಳೆ ಮಾತನಾಡಿದ ಶಾಸಕ ಆನಂದ್ ಸಿಂಗ್ ಕ್ಷೇತ್ರದ ಅಭಿವೃದ್ದಿಗೆ ಹೆಚ್ಚು ಒತ್ತು ನೀಡುವುದಾಗಿ ತಿಳಿಸಿದ್ರು.
Posted on: Sat, 24 Jan 2015 13:40:01 +0000

Trending Topics



Recently Viewed Topics




© 2015